ನಮಸ್ತೆ ಸ್ನೇಹಿತರೆ, ಕೊ’ರೋನಾ ಹಿನ್ನಲೆಯಲ್ಲಿ ಜನ ಜೀವನವೇ ಬದಲಾಗಿ ಹೋಗಿದೆ. ಇನ್ನು ಪ್ರತೀ ಬಾರಿಯಂತೆ ವಿಜ್ನ್ಯಾಹರ್ತಾ ಶ್ರೀ ಗಣೇಶನ ಹಬ್ಬ ಬಂದೆ ಬಿಟ್ಟಿದೆ. ಈಗಾಗಲೇ ಗಲ್ಲಿ ಗಲ್ಲಿಗಳಲ್ಲಿ ಸಂಭ್ರಮ ಶುರುವಾಗಿದೆ. ಆದರೆ ಇದರ ನಡುವೆ ಭಕ್ತರಿಗೆ ಸರ್ಕಾರದಿಂದ ಕಹಿ ಸುದ್ದಿಯೊಂದು ಬಂದಿದೆ. ಹೌದು ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಈ ಬಾರಿ ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಗಣೇಶನನ್ನ ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಿಸಿದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಮಾಡಿದೆ.
ಇನ್ನು ಸೋಂಕು ಹರಡುವುದನ್ನ ತಡೆಗಟ್ಟಲು ಸಾಮಾಜಿಕ ಅಂತರ ಅನಿವಾರ್ಯವಾಗಿದ್ದು ಸಾರ್ವಜನಿಕರು ಗುಂಪು ಸೇರುವುದನ್ನ ತಡೆಯಬೇಕಾಗಿದೆ. ಹಾಗಾಗಿ ಗಣೇಶ ಹಬ್ಬವನ್ನ ದೇವಸ್ಥಾನದಲ್ಲಿಯೋ ಅಥ್ವಾ ತಮ್ಮ ತಮ್ಮ ಮನೆಗಳಲ್ಲೋ ಸರಳವಾಗಿ ಆಚರಣೆ ಮಾಡಿ ಎಂದು ಸರ್ಕಾರ ಹೇಳಿದೆ.
ಕೋವಿಡ್19 ಸೋಂಕಿನ ಆತಂಕ ಇರುವುದರಿಂದ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದನ್ನು ನಿರ್ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಠಿಯಿಂದ ಕಡ್ಡಾಯವಾಗಿ ಪಾಲಿಸ ಬೇಕಾದ ಮಾರ್ಗಸೂಚಿಯನ್ನು ಇಲ್ಲಿ ನೀಡಲಾಗಿದೆ.#ಬಿಬಿಎಂಪಿ #Bengaluru #BBMPFightsCovid19 @CMofKarnataka @BBMP_MAYOR @KarnatakaVarthe @CPBlr pic.twitter.com/ctwyE4z6VH
— N. Manjunatha Prasad,IAS (@BBMPCOMM) August 14, 2020
ಹಾಗಾಗಿ ಈ ಬಾರಿ ಬೆಂಗಳೂರು ನಗರದಲ್ಲಿ ಗಣೇಶ ಹಬ್ಬವನ್ನ ಸಾರ್ವಜನಿಕವಾಗಿ ಆಚರಣೆ ಮಾಡಲಿಕ್ಕೆ ಆಗುವುದಿಲ್ಲ, ಮೈದಾನಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿನಾಯಕ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡುವಂತಿಲ್ಲ..ಹಾಗೆ ನದಿ, ಕೆರೆ, ಕಲ್ಯಾಣಿಗಳ ಬಳಿ ಗಣೇಶ ವಿಸರ್ಜನೆ ಮಾಡುವಂತಿಲ್ಲ ಎಂದು ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಇನ್ನು ಬಿಬಿಎಂಪಿ ಕೂಡ ಗಣೇಶ ವಿಸರ್ಜನೆ ಹಾಗೂ ಮೆರವಣಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244